ಬೆಂಗಳೂರು: ಹಳೆ ದ್ವೇಷ ತೀರಿಸಲು ವ್ಯಕ್ತಿಯೊಬ್ಬರ ಮೇಲೆ 30 ಬಾರಿ ಇರಿದು ಹತ್ಯೆಗೈದ ಘಟನೆ ಬಂಗೀಕುಂಠದಲ್ಲಿ ನಡೆದಿದೆ.
ಮೃತನನ್ನು ಸೈಯದ್ ಖದೀರ್(40) ಎಂದು ಗುರುತಿಸಲಾಗಿದೆ.
ಆರೋಪಿಗಳಾಗ ಅನ್ವರ್ ಮತ್ತು ತಿಮ್ಮಪ್ಪ ಅವರು ಬೈಕಿನಲ್ಲಿ ಹೋಗುತ್ತಿದ್ದ ಖದೀರ್ ಅವರನ್ನು ಅಡ್ಡಗಟ್ಟಿ, ಅವರನ್ನು ಚಾಕುವಿನ ಸಹಾಯದಿಂದ 30 ಬಾರಿ ಚುಚ್ಚಿ ಹತ್ಯೆ ನಡೆಸಿರುವುದಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಖದೀರ್ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ದಾರಿ ಮಧ್ಯದಲ್ಲೇ ಅವರು ಮೃತರಾಗಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿಯೂ ದಾಖಲಾಗಿದೆ.
ಹತ್ಯೆ ನಡೆಸಿದ ಆರೋಪಿಗಳು ನೇತಾಜಿ ನಗರದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಈ ಸಂಬಂಧ ಸದರಿ ಬಜಾರ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.