ಚಿಕ್ಕಮಗಳೂರು: ಕಾಮೇನಹಳ್ಳಿಯ ಮೀಸಲು ಕಾಡಿನಲ್ಲಿ ಗಂಧದ ಮರ ಕಡಿಯುತ್ತಿದ್ದ ದಂಪತಿಯನ್ನು ಅರಣ್ಯ ಇಲಾಖಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಬಾಲಕೃಷ್ಣ ಮತ್ತು ಸೆಲ್ವಿ ಎಂದು ಗುರುತಿಸಲಾಗಿದೆ.
ಕಾಮೇನಹಳ್ಳಿಯ ಮೀಸಲು ಅರಣ್ಯದಲ್ಲಿ ಗಂಧದ ಮರ ಕಡಿಯುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ದಾಳಿ ಮಾಡಿದ್ದು, 6 ಕೆ.ಜಿ. ಗಂಧದ ತುಂಡುಗಳು ಮತ್ತು 4 ಕೆ.ಜಿ. ಗಂಧದ ಚೆಕ್ಕೆಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.